ಹುಬ್ಬಳ್ಳಿ, ಮಾರ್ಚ್ 24: ಮಕ್ಕಳ ಅಂತಿಮ ಪರೀಕ್ಷೆಗಳು ಮುಗಿಯುತ್ತಾ ಬಂದಿದ್ದು, ಬೇಸಿಗೆ ರಜೆ ಆರಂಭವಾಗಲಿದೆ. ಬೇಸಿಗೆ ರಜೆಯಲ್ಲಿ ಪ್ರವಾಸಕ್ಕೆ ಹೋಗಲು ಯೋಚಿಸುತ್ತಿದ್ದರೇ ನೈರುತ್ಯ ರೈಲ್ವೆ ವಲಯವು (South Western Railway Zone) ನಿಮ್ಮ ಯೋಚನೆಯ ಪೂರಕವಾಗಿ ಸಿಹಿ ಸುದ್ದಿ ನೀಡಿದೆ. ನೈರುತ್ಯ ರೈಲ್ವೆ ವಲಯದ ಈ ವಿಶೇಷ ಆಫರ್ ನಿಮ್ಮ ಪ್ರವಾಸವನ್ನು ಸುಗಮಗೊಳಿಸುತ್ತದೆ. ಅದು, ಬೇಸಿಗೆ ರಜೆ ಸಂದರ್ಭದಲ್ಲಿ ಪ್ರವಾಸಿಗರಿಗೆ ಅನುಕೂಲವಾಗಲೆಂದೇ ಹುಬ್ಬಳ್ಳಿಯಿಂದ ರಾಮೇಶ್ವರಂಗೆ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ವಾರಕ್ಕೆ ಒಂದು ದಿನ ಈ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಯಾವ ದಿನದಂದು ಸಂಚರಿಸುತ್ತದೆ? ಸಮಯ? ನಿಲ್ದಾಣ ಎಲ್ಲ ಮಾಹಿತಿ ಇಲ್ಲಿದೆ. ವೇಳಾಪಟ್ಟಿ ರೈಲು ಸಂಖ್ಯೆ 07355: ಎಸ್ಎಸ್ಎಸ್ ಹುಬ್ಬಳ್ಳಿ-ರಾಮೇಶ್ವರಂ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್ ರೈಲು ಏಪ್ರಿಲ್ 5, 12, 19, 31 ರಂದು ಹುಬ್ಬಳ್ಳಿಯಿಂದ ಹೊರಟು ಮರುದಿನ ಬೆಳಗ್ಗೆ ರಾಮೇಶ್ವರಂ ತಲುಪಲಿದೆ. ರೈಲು ಸಂಖ್ಯೆ 07356: ರಾಮೇಶ್ವರಂ-ಎಸ್ಎಸ್ಎಸ್ ಹುಬ್ಬಳ್ಳಿ ಸಾಪ್ತಾಹಿಕ ವಿಶೇಷ ಎಕ್ಸಪ್ರೆಸ್ ರೈಲು ಏಪ್ರಿಲ್ 6, 13, 20 ಮತ್ತು ಮೇ 1 ರಂದು ರಾಮೇಶ್ವರಂನಿಂದ ಹೊರಟು ಮರುದಿನ ಬೆಳಗ್ಗೆ ಹುಬ್ಬಳ್ಳಿ ತಲುಪಲಿದೆ. ಹುಬ್ಬಳ್ಳಿ-ರಾಮೇಶ್ವರಂ ವಿಶೇಷ ಎಕ್ಸಪ್ರೆಸ್ ನಿಲ್ದಾಣದ ಹೆಸರುಆಗಮನನಿರ್ಗಮನಹುಬ್ಬಳ್ಳಿ……..ಬೆಳಗ್ಗೆ 6:50ಹಾವೇರಿಬೆಳಗ್ಗೆ 7:45ಬೆಳಗ್ಗೆ 7:47ರಾಣೆಬೆನ್ನೂರು8:168:17ಹರಿಹರ8:388:40ದಾವಣಗೆರೆ8:558:57ಚಿಕ್ಕಜಾಜೂರ9:359:37ಬೀರೂರು10:2310:25ಅರಸೀಕೆರೆ11:0511:25ತಿಪಟೂರು11:4311:45ತುಮಕೂರುಮಧ್ಯಾಹ್ನ 12:23ಮಧ್ಯಾಹ್ನ 12:25ಬಾಣಸವಾಡಿ2:382:43ಹೊಸೂರು3:383:40ಧರ್ಮಪುರಿಸಂಜೆ 4:30ಸಂಜೆ 4:32ಸೇಲಂ7:457:55ನಾಮಕ್ಕಲ್ರಾತ್ರಿ 8:44ರಾತ್ರಿ 8:45ಕರೂರು9:5810:00ತಿರುಚಿರಾಪಳ್ಳಿಮಧ್ಯರಾತ್ರಿ 12:05ಮಧ್ಯರಾತ್ರಿ 12:10ಪುದುಕ್ಕೊಟ್ಟೈ12:581:00ಕಾರೈಕುಡಿ1:431:45ಶಿವಗಂಗಾ2:202:22ಮಾನಮದುರೈ2:452:50ರಾಮನಾಥಪುರಂ3:383:40ರಾಮೇಶ್ವರಂನಸುಕಿನ ಜಾವ 5:20…. ರಾಮೇಶ್ವರಂ–ಹುಬ್ಬಳ್ಳಿ ವಿಶೇಷ ಎಕ್ಸಪ್ರೆಸ್ ನಿಲ್ದಾಣದ ಹೆಸರುಆಗಮನನಿರ್ಗಮನರಾಮೇಶ್ವರಂ……ರಾತ್ರಿ 8:00ರಾಮನಾಥಪುರಂರಾತ್ರಿ 8:58ರಾತ್ರಿ 8:00ಮಾನಮದುರೈ9:509:55ಶಿವಗಂಗಾ10:1510:17ಕಾರೈಕುಡಿ11:0311:05ಪುದುಕ್ಕೊಟ್ಟೈ11:3811:40ತಿರುಚಿರಾಪಳ್ಳಿಮಧ್ಯಾರಾತ್ರಿ 12:35ಮಧ್ಯಾರಾತ್ರಿ 12:40ಕರೂರು2:28ಮುಂಜಾನೆ 2:30ನಾಮಕ್ಕಲ್3:003:02ಸೇಲಂನಸುಕಿನ ಜಾವ 5:405:50ಧರ್ಮಪುರಿಬೆಳಗ್ಗೆ 7:13ಬೆಳಗ್ಗೆ 7:15ಹೊಸೂರು8:508:52ಬಾಣಸವಾಡಿ9:5110:02ತುಮಕೂರು11:1811:20ತಿಪಟೂರುಮಧ್ಯಾಹ್ನ 1:18ಮಧ್ಯಾಹ್ನ 1:20ಅರಸೀಕೆರೆ1:502:00ಬೀರೂರು2:332:35ಚಿಕ್ಕಜಾಜೂರ3:143:16ದಾವಣಗೆರೆ3:533:55ಹರಿಹರಸಂಜೆ 4:154:17ರಾಣೆಬೆನ್ನೂರು4:374:38ಹಾವೇರಿ5:095:11ಹುಬ್ಬಳ್ಳಿರಾತ್ರಿ 7:40…. ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಅಧಿಕೃತ ವೆಬ್ಸೈಟ್ www.enquiry.indianrail.gov.in ಅಥವಾ NTES app ಅಥವಾ 139ಗೆ ಕರೆ ಮಾಡಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಬೆಂಗಳೂರು ಸೇರಿದಂತೆ ಸುತ್ತಲಿನ 4 ಜಿಲ್ಲೆಗಳಲ್ಲಿ 1.87 ಲಕ್ಷ ಕೋಟಿ ರೂ. ಹೂಡಿಕೆ: ಕಿತ್ತೂರು, ಕಲ್ಯಾಣ ಕರ್ನಾಟಕಕ್ಕೆಯಾಕಿಲ್ಲ? ವರದಿ IPL 2026: RCB ಜೊತೆ KMF ನಂದಿನಿ ಡೈರಿ ಪಾಲುದಾರ