ನವದೆಹಲಿ, ಮಾರ್ಚ್ 12: ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸಿ ನಾಗರಿಕರನ್ನು ಸಬಲೀಕರಣಗೊಳಿಸುವ ದೃಷ್ಟಿಕೋನದಿಂದ ಭಾರತ ಸರ್ಕಾರವು (Union Government) 2015ರ ಜುಲೈನಲ್ಲಿ ಡಿಜಿಟಲ್ ಇಂಡಿಯಾ (Digital India) ಕಾರ್ಯಕ್ರಮವನ್ನು ಆರಂಭಿಸಿತು. ಈ ಕಾರ್ಯಕ್ರಮದ ಮೂಲಕ ಭಾರತವು ಮೂರು ಹಂತದ ಕಾರ್ಯತಂತ್ರವನ್ನು ಅನುಸರಿಸಿ ಡಿಜಿಟಲ್ ವಿಭಜನೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ ಸಾಧನೆ ಮಾಡಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ಲೋಕಸಭೆಗೆ ತಿಳಿಸಿದರು. ಇಂಟರ್ನೆಟ್ ಪ್ರವೇಶವನ್ನು ಹೆಚ್ಚಿಸುವುದು ಇಂಟರ್ನೆಟ್ ಸೇವೆಯನ್ನು ಕೈಗೆಟುಕುವಂತೆ ಮಾಡುವುದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಈ ಕ್ರಮಗಳ ಫಲವಾಗಿ ದೇಶದಲ್ಲಿ ಅಂತರ್ಗತ ಮತ್ತು ವೇಗವಾದ ಡಿಜಿಟಲ್ ಬೆಳವಣಿಗೆ ಕಂಡುಬಂದಿದೆ. ಇಂದು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಯಶಸ್ವಿಯಾಗಿ ಜಾರಿಗೆ ತಂದ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವು ವಿಶಿಷ್ಟ ಸ್ಥಾನ ಪಡೆದಿದೆ. ಇತ್ತೀಚೆಗೆ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷರು, “ವಿಶ್ವದ ಬೇರೆ ಯಾವ ದೇಶವೂ ನಿರ್ಮಿಸದ ವಿಶಿಷ್ಟ ಡಿಜಿಟಲ್ ವ್ಯವಸ್ಥೆಯನ್ನು ಭಾರತ ನಿರ್ಮಿಸಿದೆ ಎಂದು ಪ್ರಶಂಸಿಸಿದ್ದಾರೆ ಎಂದು ತಿಳಿಸಿದರು. ಅಂತರ್ಜಾಲದ ಲಭ್ಯತೆ ಹೆಚ್ಚಳ ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಇಂಟರ್ನೆಟ್ ಬಳಕೆ ಅನೇಕ ಪಟ್ಟು ಹೆಚ್ಚಾಗಿದೆ. 4ಜಿ ಮತ್ತು 5ಜಿ ನೆಟ್ವರ್ಕ್ಗಳ ವೇಗವಾದ ವಿಸ್ತರಣೆ, ದೇಶಾದ್ಯಂತ ಆಪ್ಟಿಕಲ್ ಫೈಬರ್ ಕೇಬಲ್ಗಳ ವ್ಯಾಪಕ ಜಾಲ ನಿರ್ಮಾಣ ಹಾಗೂ ಡಿಜಿಟಲ್ ಮೂಲಸೌಕರ್ಯದ ಮೇಲಿನ ಹೆಚ್ಚಿನ ಹೂಡಿಕೆ ಇವು ಈ ಬೆಳವಣಿಗೆಗೆ ಕಾರಣವಾಗಿದೆ. ಇಂಟರ್ನೆಟ್ ಕೈಗೆಟುಕುವಂತೆ ಮಾಡುವ ಕ್ರಮ ಭಾರತದಲ್ಲಿ ಡೇಟಾ ದರಗಳು ವಿಶ್ವದಲ್ಲೇ ಅತಿ ಕಡಿಮೆ ಮಟ್ಟದಲ್ಲಿವೆ. ವಿವಿಧ ಸಾರ್ವಜನಿಕ ಮೂಲಗಳ ಪ್ರಕಾರ, ಭಾರತದ ಟೆಲಿಕಾಂ ಸುಂಕಗಳು ಜಾಗತಿಕ ಸರಾಸರಿಗಿಂತ ಸುಮಾರು 25 ಪಟ್ಟು ಕಡಿಮೆಯಾಗಿದೆ. ಟೆಲಿಕಾಂ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ತರಿದ ಪಾರದರ್ಶಕ ನೀತಿಗಳಿಂದ ಇದು ಸಾಧ್ಯವಾಗಿದೆ. ಭಾರತವು ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು. ಆಧಾರ್ ಭಾರತದಲ್ಲಿ 1.43 ಶತಕೋಟಿಗೂ ಹೆಚ್ಚು ಆಧಾರ್ ಸಂಖ್ಯೆಗಳು ಸೃಷ್ಟಿಯಾಗಿದ್ದು, ಇದು ನಾಗರಿಕರಿಗೆ ಸಾರ್ವತ್ರಿಕ ಡಿಜಿಟಲ್ ಗುರುತು ಒದಗಿಸಿದೆ. ಇದರ ಮೂಲಕ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಸುಲಭವಾಗಿ ಪಡೆಯಲು ಅವಕಾಶ ಸಿಕ್ಕಿದೆ ಎಂದು ಮಾಹಿತಿ ನೀಡಿದರು. ನೇರ ಲಾಭ ವರ್ಗಾವಣೆ (DBT) ಆಧಾರ್ ಸಂಪರ್ಕಿತ ಡಿಬಿಟಿ ವ್ಯವಸ್ಥೆಯ ಮೂಲಕ 56 ಸಚಿವಾಲಯಗಳ 328 ಕಲ್ಯಾಣ ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ. ಇದರ ಪರಿಣಾಮವಾಗಿ ನಕಲಿ ಫಲಾನುಭವಿಗಳನ್ನು ತಡೆಯಲು ಸಾಧ್ಯವಾಗಿದೆ. ವಿವಿಧ ಸೇವೆಗಳಿಗಾಗಿ ದೇಶಾದ್ಯಂತ 16,600 ಕೋಟಿಗೂ ಹೆಚ್ಚು ಆಧಾರ್ ದೃಢೀಕರಣಗಳು ನಡೆದಿವೆ ಎಂದರು. Under the leadership of PM @narendramodi Ji, Digital India is advancing digital inclusion through greater access, affordability & strong Digital Public Infrastructure. pic.twitter.com/zN9VoBLZTl— Ashwini Vaishnaw (@AshwiniVaishnaw) March 11, 2026 ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಯುಪಿಐ ವೇದಿಕೆ ಇಂದು 46 ಕೋಟಿಗೂ ಹೆಚ್ಚು ಬಳಕೆದಾರರು ಮತ್ತು ಕೋಟ್ಯಂತರ ಮಾಸಿಕ ವಹಿವಾಟುಗಳನ್ನು ಹೊಂದಿದೆ. ಇದು 6.5 ಕೋಟಿ ವ್ಯಾಪಾರಿಗಳಿಗೆ ಸೇವೆ ನೀಡುತ್ತಿದ್ದು, 685 ಬ್ಯಾಂಕುಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸುವ ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯಾಗಿದೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ ನಡೆಯುವ ಡಿಜಿಟಲ್ ಪಾವತಿಗಳಲ್ಲಿ ಸುಮಾರು 81% ಯುಪಿಐ ಮೂಲಕ ನಡೆಯುತ್ತಿದ್ದು, ಜಾಗತಿಕ ನೈಜ-ಸಮಯದ ಡಿಜಿಟಲ್ ಪಾವತಿಗಳಲ್ಲಿ ಸುಮಾರು 49% ಪಾಲು ಭಾರತದ್ದಾಗಿದೆ. ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ: ಮಾರ್ಚ್ 13 ರಂದು ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಜಮೆ ಸಾರ್ವಜನಿಕ ಸುರಕ್ಷತೆಗಾಗಿ ಇಂಟರ್ನೆಟ್ ತಾತ್ಕಾಲಿಕ ಸ್ಥಗಿತ ಸಾರ್ವಜನಿಕ ತುರ್ತು ಪರಿಸ್ಥಿತಿ ಅಥವಾ ಸುರಕ್ಷತಾ ಕಾರಣಗಳಿಂದಾಗಿ ಇಂಟರ್ನೆಟ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅಧಿಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಇದೆ. ಇದನ್ನು ದೂರಸಂಪರ್ಕ (ಸೇವೆಗಳ ತಾತ್ಕಾಲಿಕ ಅಮಾನತು) ನಿಯಮಗಳು, 2024 ಹಾಗೂ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಪ್ರಕಾರ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರೈತರಿಗೆ ಸಿಹಿ ಸುದ್ದಿ: ಮಾರ್ಚ್ 13 ರಂದು ಖಾತೆಗೆ ಪಿಎಂ ಕಿಸಾನ್ ಸಮ್ಮಾನ್ ಹಣ ಜಮೆ ಶ್ರೀನಗರ: ಉರಿ ಸೆಕ್ಟರ್ ಬಳಿ ಒಳನುಸುಳುವಿಕೆ ಯತ್ನ, ಉಗ್ರನ ಹತ್ಯೆ